ವಿರಚಯತಿ ಸುಂದರೀಶತಮುತ್ಪ್ರೇಕ್ಷಾವಲ್ಲಭ: ಸುಕವಿ: //
ಸಹೃದಯ ರಸಿಕರಿಗೆ ಹೃದಯಗ್ರಾಹ್ಯವಾದ ಈ ಸುಂದರೀಶತಕವನ್ನು ಸುಕವಿ ಉತ್ಪ್ರೇಕ್ಷಾವಲ್ಲಭನು ಮಹಾರಾಜ ಮದನನ ಆದೇಶದಿಂದಲೇ ರಚಿಸುತ್ತಿದ್ದಾನೆ.
ಸುಕವಿ ಉತ್ಪ್ರೇಕ್ಷಾವಲ್ಲಭನು ಈ ಸುಂದರೀಶತಕವನ್ನು ಸಾಕ್ಷಾತ್ ಮನ್ಮಥನ ಆದೇಶದಿಂದಲೇ ರಚಿಸುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾನೆ. ಆ ಮನ್ಮಥನನ್ನು ಮಹೀಪಾಲ, ಅಂದರೆ ಭೂಪಾಲ, ಮಹಾರಾಜನೆಂದು ಕರೆದಿದ್ದಾನೆ. ತನ್ನ ಪಂಚ ಹೂಬಾಣಗಳಾದ ಅರವಿಂದ ( ಕಮಲ ಪುಷ್ಪ), ಅಶೋಕ, ಚೂತ (ಮಾವಿನ ಹೂವು), ನವಮಲ್ಲಿಕಾ (ಮಲ್ಲಿಗೆ ಹೂವು), ನೀಲೋತ್ಪಲ ( ಕನ್ನೈದಿಲೆ) ಗಳನ್ನು ಬಿಟ್ಟು ಸ್ತ್ರೀ, ಪುರುಷರನ್ನು ಪ್ರೇಮದಲ್ಲಿ ಬೀಳಿಸಿ ಇಡೀ ಭೂಮಿಯನ್ನು ಪ್ರೇಮಮಯವನ್ನಾಗಿ ಮಾಡುವ ಮನ್ಮಥನು ಭೂಮಿಯನ್ನೇ ಗೆದ್ದ ಮಹಾರಾಜನಲ್ಲದೇ ಇನ್ನೇನು?
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ