ಭಾನುವಾರ, ಮೇ 3, 2026

ಸುಂದರೀಶತಕ -೨೯

ಸಂಸ್ಕೃತ ಮೂಲ 

ಶರಣಮಿವ ಯಾಚಮಾನಂ ಕ್ವಚಿತ್ಕ್ವಚಿತದ್ಬಾಲ್ಯಮಂಗೇಷು /
ಭ್ರಮತಿ ಮನೋಜನಿದೇಶಾದಧಿಕಾರಿಣಿ ಯೌವನೇ ಭವತಿ //

ಕನ್ನಡ ಅನುವಾದ 

     ' ಮನೋಜನಾದ ಕಾಮದೇವನ ಆಜ್ಞೆಯಂತೆ ಯೌವನವು ಈ ಸುಂದರಿಯ ಶರೀರದಲ್ಲಿ ಆಗಮಿಸಿ ಅಧಿಕಾರಿಣಿಯಾದಾಗ, ಅದರಿಂದ ಉಳಿಯಲು ಬಾಲ್ಯವು ಆಶ್ರಯ ಬೇಡುವಂತೆ ಕೆಲವಾರು ಅಂಗಾಂಗಗಳಲ್ಲಿ ಪರಿಭ್ರಮಿಸುತ್ತಿದೆ!' 
      ಸುಂದರಿಯ ಶರೀರಕ್ಕೆ ಈಗಷ್ಟೇ ಯೌವನವು ಬಂದಿದೆ! ಆದರೆ ಬಾಲ್ಯವು ಇನ್ನೂ ಪೂರ್ತಿ ಹೋಗಿಲ್ಲ. ಹಾಗಾಗಿ ಇದು ವಾಯು:ಸಂಧಿಕಾಲದ ಚಿತ್ರಣ. ಯೌವನವು ಬಂದರೂ ಬಾಲ್ಯದ ಆ ಮುಗ್ಧ ಭಾವ, ಕಂಗಳ ಚಂಚಲತೆ, ತುಂಟು ಮುಖ, ಮುದ್ದು ಮಾತು, ಮೊದಲಾದವು ಇನ್ನೂ ಸ್ವಲ್ಪ ಸ್ವಲ್ಪ ಇವೆ. ಹೀಗೆ, ಇದು ನವಯೌವನವು ಬಾಲ್ಯದೊಂದಿಗೆ ಬೆರೆತಿರುವ ಮಧುರ ಭಾವ! ಇದನ್ನು ಕವಿಯು ಸ್ವಾರಸ್ಯಕರವಾಗಿ ಚಿತ್ರಿಸುತ್ತಾನೆ. ಕಾಮದೇವನ ಆಜ್ಞೆಯಂತೆ ದೇಹಕ್ಕೆ ಯೌವನವು ಬಂದು ಅಧಿಕಾರಿಣಿಯಾದಾಗ, ಬಾಲ್ಯವು ತಾನು ನಾಶವಾಗುವೆನೆಂದು ಹೆದರಿ, ಹೇಗಾದರೂ ಉಳಿಯಲು ಕೆಲವು ಅಂಗಾಂಗಗಳಲ್ಲಿ ತನ್ನನ್ನು ಉಳಿಸಿಕೊಳ್ಳಲು ಆಶ್ರಯ ಬೇಡುವಂತೆ ಅಲ್ಲಲ್ಲಿ ಪರಿಭ್ರಮಿಸುತ್ತಿದೆ ಎಂದು ವರ್ಣಿಸುತ್ತಾನೆ! 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ